ಆಸ್ಪತ್ರೆ ನಿರ್ಮಾಣದ ಸ್ಥಳವನ್ನು ವೀಕ್ಷಿಸಿದ ಶಾಸಕ ವಿಜಯಾನಂದ ಕಾಶಪ್ಪನವರ
ಬಾಗಲಕೋಟ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಯೋಜಿತ ೫೦ ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆ ಸ್ಥಳವನ್ನು ಶಾಸಕ ವಿಜಯಾನಂದ ಕಾಶಪ್ಪನವರ ವೀಕ್ಷಿಸಿ ಪರಿಶೀಲನೆ ಮಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯನಿರ್ವಹಿಸುವ ಕಟ್ಟಡ ಮತ್ತು ಶಿಥಿಲಗೊಂಡಿರುವ ಹಾಗೂ ಬಯಲು ಜಾಗೆಯನ್ನು ನಕ್ಷೆ ಸಮೇತವಾಗಿ ವೀಕ್ಷಿಸಿದ ಶಾಸಕರು, ಅಧಿಕಾರಿಗಳ ಜೊತೆ ಚರ್ಚಿಸಿದರು. ಸುರಕ್ಷಿತ ಸ್ಥಳದಲ್ಲಿ ಈ ಆಸ್ಪತ್ರೆ ನಿರ್ಮಾಣ ಆಗಬೇಕಾಗಿದೆ.
ತಾಲೂಕಿಗೆ ಈ ಆಸ್ಪತ್ರೆ ಅವಶ್ಯಕವಾಗಿದೆ. ಈಗಾಗಲೇ ಈ ಆಸ್ಪತ್ರೆ ನಿರ್ಮಾಣದ ಅವಶ್ಯಕತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಷ್ಟರಲ್ಲೆ ಮಂಜೂರಾತಿ ಸಿಗಲಿದೆ ಎಂದರು. ಆರೋಗ್ಯ ಇಲಾಖೆ ಅಭಿಯಂತರ ಸ್ಥಳದ ಮಾಹಿತಿ ನೀಡಿದಂತೆ ಸದ್ಯ ಕಾರ್ಯ ನಿರ್ವಹಿಸುವ ಕಟ್ಟಡಗಳಿಗೆತೊಂದರೆಯಾಗದAತೆ ಮತ್ತು ಶಿಥಿಲಾವಸ್ಥೆ ಕಟ್ಟಡಗಳನ್ನು ತೆರವುಗೊಳಿಸಿಕೊಂಡು ಪಾರ್ಕಿಂಗ್ ಮತ್ತು ಗಾರ್ಡನ್ ಸಮೇತ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಬೇಕೆಂದು ಶಾಸಕ ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ಶಿಥಿಲಗೊಂಡ ಹಳೆ ತಹಶೀಲ್ದಾರರ ಕಚೇರಿ ಮತ್ತು ಸುತ್ತಲಿರುವ ಬಯಲು ಜಾಗೆಯನ್ನು ಯಾವುದಾದರೂ ಕಚೇರಿ ಕಟ್ಟಡಕ್ಕೆ ಅಥವಾ ಸರ್ಕಾರಿ ವಸತಿ ನಿರ್ಮಾಣ ಕುರಿತು ಶಾಸಕರು ವೀಕ್ಷಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಪರವೇಜ್ ಖಾಜಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಂಕೋಲ್ಕರ, ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಶಿವಾನಂದ ಕಂಠಿ, ರಾಜು ಬೋರಾ, ವಿಜಯ ಗದ್ದನಕೇರಿ, ಶಾಂತಕುಮಾರ ಸುರಪೂರ, ಆರೋಗ್ಯ ಅಭಿಯಂತರ ಎಂ.ಎA. ಕಟ್ಟಿಮನಿ, ಮಹಾಂತೇಶ ಮದರಿ, ನಗರ ಮಾಪಕ ಮುರಗೇಶ ಕೊಳಮಲಿ ಹಾಗೂ ಇತರರು ಇದ್ದರು.