Koodalasangama Colony Sangameshwara Jatra Mahotsav held on the occasion of ಸಂಭ್ರಮದಿ0ದ ನಡೆದ ಕೂಡಲಸಂಗಮ ಕಾಲೋನಿ ಸಂಗಮೇಶ್ವರ ಜಾತ್ರಾ ಮಹೋತ್ಸವ

WhatsApp Group Join Now
Telegram Group Join Now
Instagram Group Join Now
Spread the love

 

ಸಂಭ್ರಮದಿ0ದ ನಡೆದ ಕೂಡಲಸಂಗಮ ಕಾಲೋನಿ ಸಂಗಮೇಶ್ವರ ಜಾತ್ರಾ ಮಹೋತ್ಸವ

ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪೋಲಿಸ್ ಠಾಣೆಯ ಹಿಂದುಗಡೆ ಇರುವ ಕೂಡಲಸಂಗಮ ಕಾಲೋನಿಯ ಸಂಗಮೇಶ್ವರ ಜಾತ್ರಾ ಮಹೋತ್ಸವ ಸೋಮವಾರದಂದು ಮಧ್ಯಾಹ್ನ ಸಡಗರ ಸಂಭ್ರಮದಿ0ದ ನಡೆಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ಎರೆ ಹಳ್ಳದಲ್ಲಿ ಇರುವ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ವಿಧಿವತ್ತಾಗಿ ನಡೆದವು. ನಂತರ ಬಂದ ಎಲ್ಲಾ ಭಕ್ತಾಧಿಗಳಿಗಾಗಿ ಉದರ ಸಜ್ಜಕ ಬದನೆಕಾಯಿ ಪಲ್ಯ ಉಪ್ಪಿನಕಾಯಿ ಅನ್ನ ಸಾರು ಪ್ರಸಾದವನ್ನು ವಿತರಿಸಲಾಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಜಾತ್ರಾ ಮಹೋತ್ಸವ ನೇತೃತ್ವವನ್ನು ಶರಣಯ್ಯ ಹಿರೇಮಠ ,ಗುರು ಗಾಣಿಗೇರ, ಪರಸಪ್ಪ ಕೃಷ್ಣಾಪೂರರೈತ ,ನೀಲಪ್ಪ ಬೂದಿಹಾಳ, ಶಿವಾನಂದ ಒಡೆಯರ, ನಬಿಸಾಬ ಮುಲ್ಲಾ, ಬಸವರಾಜ ತೊಂಡಿಹಾಳ, ಶಿವಾನಂದಯ್ಯ ಹಿರೇಮಠ, ಸುರೇಶ ಗಚ್ಚಿನಮಠ, ದೊಡ್ಡಪ್ಪ ಹಡಪದ ಕಾಲೋನಿಯ ಹಿರಿಯರು ಮತ್ತು ಯುವಕರು ಮತ್ತಿತರರು ವಹಿಸಿದ್ದರು.

(ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ)                      ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


Spread the love

Leave a Comment

error: Content is protected !!