Maharshi Valmiki ಸಂಭ್ರಮದಿ0ದ ಜರುಗಿದ ಮಹರ್ಷಿ ವಾಲ್ಮೀಕಿ ಕಂಚಿನ ಮೂರ್ತಿ ಮೆರವಣಿಗೆ
ಬಾಗಲಕೋಟ : ಜಿಲ್ಲೆಯ ಇಳಕಲ್ದ ಮಹರ್ಷಿ ವಾಲ್ಮೀಕಿ ಮಂದಿರದ ಕಂಚಿನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಫೆ ೨
ಭಾನುವಾರದಂದು ನಡೆಯಲಿದೆ ಅದರ ಅಂಗವಾಗಿ ಫೆ. ೦೧ ಶನಿವಾರ ಮಧ್ಯಾಹ್ನ ೩ ಗಂಟೆಯ ಸಂದರ್ಭ ಮಹರ್ಷಿ
ವಾಲ್ಮೀಕಿ ಕಂಚಿನ ಮೂರ್ತಿ ಮೆರವಣಿಗೆ ನಗರದಲ್ಲಿ ಸಡಗರ ಸಂಭ್ರಮದಿ0ದ ನಡೆಯಿತು.
ಮೆರವಣಿಗೆಯಲ್ಲಿ ೨೫೦ ಕ್ಕೂ ಹೆಚ್ಚು ಮಹಿಳೆಯರು ಕುಂಭಗಳನ್ನು ಹೊತ್ತುಕೊಂಡು ಬಸವನಗರದ ಗಣೇಶ ದೇವಸ್ಥಾನದಿಂದ
ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿ ದೇವಸ್ಥಾನವನ್ನು ತಲುಪಿತು.ಮೆರವಣಿಗೆಯ ನೇತೃತ್ವವನ್ನು ಧರ್ಮದರ್ಶಿ ಶಾಂತಕುಮಾರ ಸಮಾಜದ ಮುಖಂಡರಾದ ದುರಗೂಜಿ ಸುರಪುರ,
ಚಂದ್ರು ತಳವಾರ, ಸೋಮು ಬಲಕುಂದಿ, ವೆಂಕಣ್ಣ ತಪ್ಪಲದಡ್ಡಿ,ಹನಮಂತ ವಾಲಿಕಾರ, ಮಂಜು ಕಿಡದೂರ,
ಮಹಾಂತೇಶ ಬಂಡಿ, ಮಂಜುನಾಥ ಕಟಗಿ, ಪಾಂಡು ಬಾರಿಗಿಡದ, ಮುದಿಯಪ್ಪ ಪೂಜಾರಿ ಮತ್ತಿತರರು ವಹಿಸಿದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)