PM ಮಣಿಪುರ, ಪಶ್ಚಿಮ ಬಂಗಾಳ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಧಾನಿ ಮಾತು
ಮಣಿಪುರದ ವಿಷಯದ ಬಗ್ಗೆ ನಾನು ಕಳೆದ ಬಾರಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದೇನೆ, ಮಣಿಪುರದಲ್ಲಿ ಸಹಜ ಸ್ಥಿತಿಗೆ ತರಲು ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು. ಅಲ್ಲಿ ನಡೆದ ಘಟನೆಗಳು, ಮಣಿಪುರದಲ್ಲಿ 11,000 ಕ್ಕೂ ಹೆಚ್ಚು ಎಫ್ಐಆರ್ಗಳನ್ನು ದಾಖಲಿಸಲಾಗಿದೆ, 500ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರದ ಘಟನೆಗಳು ನಿರಂತರವಾಗಿ ಕಡಿಮೆಯಾಗುತ್ತಿವೆ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳಬೇಕು, ಅಂದರೆ ಶಾಂತಿಯಲ್ಲಿ ನಂಬಿಕೆ ಹೊಂದಲು ಸಾಧ್ಯವಾಗುತ್ತಿದೆ.
ಇಂದು, ಮಣಿಪುರದ ಹೆಚ್ಚಿನ ಭಾಗಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಶದ ಉಳಿದ ರಾಜ್ಯಗಳಂತೆಯೇ, ಮಣಿಪುರವೂ ಸಹ ಪರೀಕ್ಷೆಗಳನ್ನು ನಡೆಸಿತಿದೆ ಮತ್ತು ತನ್ನ ಅಭಿವೃದ್ಧಿಯತ್ತ ಮುಂದುವರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಂತಿ ಮತ್ತು ಸೌಹಾರ್ದಯುತ ಪರಿಹಾರಕ್ಕಾಗಿ ಎಲ್ಲಾ ಮಾತುಕತೆ ನಡೆಸುತ್ತಿವೆ ಮತ್ತು ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ.
ಬಂಗಾಳದ ಹಿಂಸಾತ್ಮಕ ವಿಡಿಯೋ ಮತ್ತು ಸಂದೇಶ್ಖಾಲಿ ವಿಷಯಗಳ ಬಗ್ಗೆ ಮಾತನಾಡಿದ ಪಿಎಂ ಮೋದಿ. ಈ ದೌರ್ಜನ್ಯಗಳ ಬಗ್ಗೆ ಯಾವುದೇ ವಿರೋಧ ಪಕ್ಷದ ನಾಯಕರುಗಳು ಮಾತನಾಡಲಿಲ್ಲ. ತಮ್ಮನ್ನು ತಾವು ಪ್ರಗತಿಪರ ಸ್ತ್ರೀವಾದಿ ನಾಯಕರೆಂದು ಪರಿಗಣಿಸಿಕೊಳ್ಳುವವರೂ ಸಹ, ತಮ್ಮ ತುಟಿಗಳನ್ನು ಜಿಪ್ ಹಾಕಿದ್ದಾರೆ, ಎಂದು ಪ್ರಧಾನಿ ರಾಜ್ಯಸಭೆಯಲ್ಲಿ ಮಾತನಾಡಿದರು .






