Sardar Vallabhbhai Patel Jayanti ಇಳಕಲ್ಲದ ಬಿಜೆಪಿ ಕಾರ್ಯಾಲಯದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿ ಆಚರಣೆ
ಇಳಕಲ್ಲ: ಸ್ವಾತಂತ್ರ್ಯನAತರ ಭಾರತವನ್ನು ಒಗ್ಗೂಡಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಮಾಡಿದ ಸೇವೆ ಅಪಾರ.
ಸುಮಾರು ೫೬೨ ಸಂಸ್ಥಾನಗಳನ್ನು ಒಗ್ಗೂಡಿಸಿ ಒಂದು ಬಲಿಷ್ಠ ರಾಷ್ಟ್ರದ ನಿರ್ಮಾಣ ಮಾಡಿದ ಪಟೇಲ್ ಅವರು, ದೇಶದ ಭೌಗೋಳಿಕ
ಏಕತೆಗೆ ಶಾಶ್ವತ ಅಡಿಪಾಯ ಹಾಕಿದರು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರದಂದು ಭಾರತ ರತ್ನ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ೧೫೦ ನೇ
ಜನ್ಮ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಈ ಸಮಯದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ, ನಗರ ಮಂಡಲ ಪ್ರಧಾನ
ಕಾರ್ಯದರ್ಶಿ ಚಂದ್ರಶೇಖರ ಏಕಬೋಟೆ , ಎಂ.ಆರ್. ಪಾಟೀಲ ,ಮಹಾಂತಪ್ಪ ಚೆನ್ನಿ , ರಾಮಣ್ಣ ಲಮಾಣಿ ,
ಮಹಾಂತೇಶ ಹೊಸಮನಿ , ಅನಿಲ ಬಡಿಗೇರ, ಮಹಾಂತೇಶ ಪೂಜಾರಿ , ಚನ್ನನಗೌಡ ಹೊಸಮನಿ , ಆದರ್ಶ ಪಾಟೀಲ ,
ಬಸು ರಾಂಪುರ , ಸಾಯಿ ತಪ್ಪಲದಡ್ಡಿ ಮತ್ತಿತರರು ಇದ್ದರು.





