Tata Ratanaji ಜಗತ್ತಿಗೆ ಟಾಟಾ ಹೇಳಿದ ರತನಜಿ
ಇಳಕಲ್ : ಭಾರತೀಯ ಉದ್ದಿಮೆಯ ಮಹಾನ್ ವ್ಯಕ್ತಿ ಸರಳ ಸಜ್ಜನಿಕೆಯ ರತನಲಾಲ ಟಾಟಾ ನಿಧನಕ್ಕೆ ಇಲ್ಲಿನ ಗಣ್ಯ ವ್ಯಕ್ತಿಗಳು ಸಂಘ ಸಂಸ್ಥೆಗಳು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಚಿತ್ತರಗಿ ಪೀಠದ ಗುರುಮಹಾಂತಶ್ರೀಗಳು, ಸಿದ್ದನಕೊಳ್ಳದ ಡಾ ಶಿವಕುಮಾರ ಸ್ವಾಮೀಜಿ, ನಂದವಾಡಗಿ ಮಠದ ಡಾ. ಚನ್ನಬಸವದೇವರು.ಶಿರೂರ ನಿಸರ್ಗ ಕೇಂದ್ರದ ಡಾ ಬಸವಲಿಂಗ ಸ್ವಾಮಿಗಳು ರತನಲಾಲ ಟಾಟಾ ನಿಧನಕ್ಕೆ ಶೋಕಿಸಿದ್ದಾರೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಎಸ್ ಆರ್ ಎನ್ ಇ ಫೌಂಡೇಶನ್ ಅಧ್ಯಕ್ಷ ಎಸ್ ಆರ್ ನವಲಿಹಿರೇಮಠ ,ಲೇಖಕ ಬಂಡು ಕಟ್ಟಿ,ತೆರಿಗೆ ಸಲಹೆಗಾರ ಪ್ರಶಾಂತ ಹಂಚಾಟೆ,
ಅಂಕಣಕಾರರಾದ ಮಲ್ಲಿಕಾರ್ಜುನ ಕರಡಿ, ರಾಜಶೇಖರ ಕಲ್ಮಠ , ಲಯನ್ಸ್ ಕ್ಲಬ್ ಅಧ್ಯಕ್ಷ ಮಹಾಬಳೇಶ ಮರಟದ, ರೋಟರಿ ಕ್ಲಬ್ ಅಧ್ಯಕ್ಷ ಬಾಬು ರಾಜೊಳ್ಳಿ, ಜೇಸಿ ಸಿಲ್ಕ್ ಸಿಟಿ ಅಧ್ಯಕ್ಷೆ ರಾಜೇಶ್ವರಿ ಹರಿಹರ, ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ ಮತ್ತಿತರರು
ಜಗತ್ತಿಗೆ ಟಾಟಾ ಹೇಳಿದ ಉದ್ಯಮಗಳ ಮೇರು ಪರ್ವತ ರತನಲಾಲ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)