ಮಹಾಕೂಟದಲ್ಲಿ ಶಿವ ಕಲ್ಯಾಣೋತ್ಸವದಲ್ಲಿ ಬಾಬಾ ರಾಮದೇವ್ ಭಾಗಿ
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಐತಿಹಾಸಿಕ ಮಹಾಕೂಟಕ್ಕೆ ಯೋಗಗುರು ರಾಮದೇವ ಬಾಬಾ ಭೇಟಿ ನೀಡಿದ್ದಾರೆ.
ಶಿವಕಲ್ಯಾಣೋತ್ಸವ ಕಾರ್ಯಕ್ರಮದ ಹಿನ್ನೆಲೆ ಮಹಾಕೂಟಕ್ಕೆ ಭೇಟಿ ನೀಡಿ ಮಹಾಕೂಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಳೆದ ಆರು ದಿನಗಳಿಂದ ನಡೆಯುತ್ತೊರಿವ ಕಲ್ಯಾಣೋತ್ಸವಕ್ಕೆ ಭಕ್ತ ಸಮೂಹ ಸಾಕ್ಷಿಯಾಗಿದ್ದು,ಬಾಬಾ ರಾಮದೇವ ಅವರು ಇಂದು ಭೇಟಿ ನೀಡಿ ಮಹಾಕೂಟೇಶ್ವರನಿಗೆ ವಿಶೇಷ ಪೂಜೆಸಲ್ಲಿಸಿದ್ದಾರೆ.
ಶಿವಕಲ್ಯಾಣೋತ್ಸವ ಮುಗಿದ ಬಳಿಕ ಹರಿದ್ವಾರಕ್ಕೆ ತೆರಳಲಿದ್ದಾರೆ. ಇನ್ನು ಸ್ಥಳೀಯ ಭಕ್ತರು ರಾಮದೇವ ಬಾಬಾರವರನ್ನ ಆತ್ಮೀಯವಾಗಿ ಸ್ವಾಗತಿಸಿದ್ದು, ಶಿವಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ದಾರೆ.






