
ಇಂದು ಜೆಸಿಐ ಮಹಾಂತಶ್ರೀ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಇಳಕಲ್ : ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಷನಲ್ದ ಜೆ.ಸಿ.ಐ ಮಹಾಂತಶ್ರೀ ಸಿಟಿ ಇಳಕಲ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾಂಭ
ಜುಲೈ ೨೦ ಶನಿವಾರ ಸಾಯಂಕಾಲ ೬ ಗಂಟೆಗೆ ನಗರದ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸದಸ್ಯ ರಾಜು ಇಳಕಲ್ ತಿಳಿಸಿದ್ದಾರೆ.
ಸಾನಿಧ್ಯವನ್ನು ಗುರುಮಹಾಂತಶ್ರೀಗಳು, ದರ್ಗಾ ಗುರುಗಳ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಗವಿಚನ್ನ ಕೆಂಭಾವಿಮಠ ವಹಿಸಲಿದ್ದಾರೆ,
ಮುಖ್ಯ ಅತಿಥಿಗಳಾಗಿ ಜೆ.ಸಿ.ಐ ಇಂಡಿಯಾದ ರಾಷ್ಟಿçÃಯ ಉಪಾಧ್ಯಕ್ಷ ಜೆ.ಎಫ್,ಸಿ ಸರವಣನ್ ಎ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಬಸವೇಶ್ವರ ಇಂಜನೀಯರಿAಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮಹಾಂತಪ್ಪ ವಾಲಿ ಅವರಿಗೆ ಸನ್ಮಾನ ಜರುಗಲಿದೆ.
ನೂತನ ಅಧ್ಯಕ್ಷ ಚನ್ನವೀರೇಶ ಹಾವಣಗಿ ಹಾಗೂ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧ್ಯಕ್ಷ ಅಖಿಲ್ ಅಕ್ಕಿ ತಿಳಿಸಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ ಇಳಕಲ್ಲ





