Bagalkot JDS District President Hanamantha ನಿಖಿಲ್ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಬಾಗಲಕೋಟೆ ಜೆಡಿಎಸ್.ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ
ಜಾತ್ಯಾತೀತ ಜನತಾದಳ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲು ಈಗಾಗಲೇ ಜೆ.ಡಿ.ಎಸ್.ಪಕ್ಷದ ರಾಜ್ಯ ಯುವ ಘಟಕದ
ರಾ ಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಯವರನ್ನು ಬಾಗಲಕೋಟೆ ಜೆ.ಡಿ.ಎಸ್.ಪಕ್ಷದ ಜಿಲ್ಲಾಧ್ಯಕ್ಷ “ಹನಮಂತ ಮಾವಿನಮರದ
ಹಾಗೂ ಸದಾನಂದ ನಾಗನೂರ,ಸಂತೋಷ ನಾಯನೇಗಲಿ””ಸೇರಿದಂತೆ ಇನ್ನೂ ಆನೇಕ ಮುಖಂಡರು ಬೆಂಗಳೂರಿನಲ್ಲಿ ಭೇಟಿ ಮಾಡಿ
ಪಕ್ಷ ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಬಾಗಲಕೋಟೆಗೆ ಆಗಮಿಸುವ ಕುರಿತು ಚರ್ಚೆ ನಡೆಸಲಾಯಿತು.
ಕೋಟೆ ನಗರಿ ಬಾಗಲಕೋಟೆ ಜಿಲ್ಲೆಯಲ್ಲಿ ಜೆ. ಡಿ. ಎಸ್.ಪಕ್ಷವನ್ನು ಬಲಪಡಿಸಲು ಜ್ಯಾತ್ಯಾತೀತ ಜನತಾ ದಳ ಪಕ್ಷದಿಂದ ಸದಸ್ಯತ್ವ
ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು ಕಾರ್ಯಕರ್ತರು ಉತ್ಸಾಹದಿಂದ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯ ಯುವಘಟಕದ
ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಯವರ ಆಗಮನಕ್ಕಾಗಿ ಕಾತುರದಿಂದ ಉತ್ಸಾಹದಿಂದ ಕಾಯುತ್ತಿದ್ದು ಯುವನಾಯಕನ
ಆಗಮನದಿಂದ ಕೋಟೆ ನಗರಿ ಬಾಗಲಕೋಟೆ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಪ್ರಾರಂಭವಾವಾಗುವುದರಲ್ಲಿ ಸಂದೇಹವಿಲ್ಲ ಎನ್ನಬಹುದು..
ಸದ್ಯದಲ್ಲಿಯೇ ಯುವಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ಬಾಗಲಕೋಟೆ ಜಿಲ್ಲೆಗೆ
ಆಗಮಿಸುವ ದಿನಾಂಕ ನಿಗದಿಯಾಗಲಿದೆ ಎಂದು ಬಾಗಲಕೋಟೆ ಜೆ.ಡಿ.ಎಸ್.ಪಕ್ಷದ ಜಿಲ್ಲಾಧ್ಯಕ್ಷರಾದ ಹನಮಂತ ಮಾವಿನಮರದ ತಿಳಿಸಿದ್ದಾರೆ.