P.C. Gaddigowda ಪಿ.ಸಿ.ಗದ್ದಿಗೌಡರಿಗೆ ಮನವಿ ಸಲ್ಲಿಸಿದ ರೈಲ್ವೇ ಹೋರಾಟ ಸಮಿತಿ
ಇಳಕಲ್ ರೈಲ್ವೇ ಹೋರಾಟ ಸಮಿತಿಯ ಸರ್ವ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಮತ್ತು ಹುನಗುಂದ
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ
ಅವರನ್ನು ಭೇಟಿ ಮಾಡಿ ಇಳಕಲ್ಲ ನಗರದ ಜನತೆಯ ಬಹು ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿಯಿಂದ
ಚಿತ್ರದುರ್ಗದ ವಾಯಾ ಇಳಕಲ್ಲಗೆ ಹೊಸ ರೈಲು ಮಾರ್ಗದ ಸರ್ವೇ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಳಕಲ್ ರೈಲ್ವೆ ಹೋರಾಟ ಸಮಿತಿಯ ಸದಸ್ಯರಾದ ಶರಣಪ್ಪ ಅಕ್ಕಿ, ಬಸವರಾಜ ಮಠದ,
ಶ್ರೀಕಾಂತ ಹೊಸಮನಿ, ಲಕ್ಷö್ಮಣ ಗುರಂ ಮತ್ತು ಬಿಜೆಪಿ ಮುಖಂಡರಾದ ವೆಂಕಟೇಶ ಪೋತಾ, ಎಸ್.ಜೆ.ರಾಂಪೂರ,
ಮಹಾಂತಗೌಡ ಪಾಟೀಲ ತೊಂಡಿಹಾಳ, ಅಶೋಕ ಶ್ಯಾವಿ ಮತ್ತಿತರರು ಇದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)